Skip to main content

Posts

Showing posts from April, 2021

Sanchaya Cares Initiative Report

Sanchaya Cares Initiative Report ಕೋವಿಡ್ 19 ಪಿಡುಗು ಇಡೀ ಜಗತ್ತಿನ ಹಾದಿಯನ್ನು ಬದಲಿಸಿತು. ಭಾರತ ಮತ್ತು ಕರ್ನಾಟಕ ಇದಕ್ಕೆ ಹೊರತಾಗಲಿಲ್ಲ. ಸಹಸ್ರಾರು ಜನ ತಮ್ಮ ಉಳಿತಾಯ, ಉದ್ಯೋಗಗಳನ್ನಷ್ಟೇ ಅಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನೂ ಕೂಡ ಈ ಪಿಡುಗಿಗೆ ಕಳೆದುಕೊಂಡರು. ಎಲ್ಲರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಹೆಣಗಾಡುತ್ತಿರುವುದನ್ನು ನೋಡುವುದೇ ಒಂದು ಕಷ್ಟಕರ ಸಂಗತಿಯಾಗಿತ್ತು. ಆದರೂ ನಮ್ಮ ಸಮಾಜ ಒಗ್ಗಟ್ಟಾಗಿ ಜನರ ಈ ಕಷ್ಟಗಳಿಗೆ ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಹಲವರು ಸಿದ್ದ ಆಹಾರವನ್ನು ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ತಲುಪಿಸುತ್ತಿದ್ದರೆ ಇನ್ನೂ ಹಲವರು ದಿನಸಿ ಸಾಮಾಗ್ರಿಗಳ ಕಿಟ್ ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ಭೇಧಭಾವವಿಲ್ಲದೆ ಪೂರೈಸಿದ ರೀತಿ ಅಭಿನಂದನೀಯ. ಸಂಚಯದ ಕೆಲ ಸದಸ್ಯರೂ ಕೂಡ ಈ ಕೆಲಸಗಳಲ್ಲಿ ಮತ್ತು ಕೋವಿಡ್ ವಾರಿಯರ್‍ಗಳಾಗಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆಯಲ್ಲೇ ಲಾಕ್‍ಡೌನ್‍ನ ಅರ್ಥ ಮತ್ತು ಸ್ವರೂಪ ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ನಮ್ಮ ಸಾಮಾಜಿಕ ಜವಬ್ದಾರಿಗಳನ್ನು ನಿಭಾಯಿಸುತ್ತಾ ಹಾಗೂ ಈ ಲಾಕ್‍ಡೌನ್‍ನಿಂದ ಹೊಮ್ಮಿದ ಹೊಸ ರೀತಿಯ ವರ್ಕ್‍ಫ್ರಂ ಹೋಮ್ ಸಂಸ್ಕøತಿಗೂ ನಾವು ಹೊಂದಿಕೊಳ್ಳತೊಡಗಿದೆವು. ನಮ್ಮ ಈ ಕಾರ್ಯಗಳ ನಡುವೆ ನಮ್ಮ ರಂಗಭೂಮಿಯ ಕೆಲಸಗಳನ್ನೂ ಕೂಡ ಹೊಸದೃಷ್ಟಿಕೋನವಾದ ಆನ್‍ಲೈನ್ ಮೀಡಿಯಂಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದೆವು. ಚದುರ...