Sanchaya Cares Initiative Report ಕೋವಿಡ್ 19 ಪಿಡುಗು ಇಡೀ ಜಗತ್ತಿನ ಹಾದಿಯನ್ನು ಬದಲಿಸಿತು. ಭಾರತ ಮತ್ತು ಕರ್ನಾಟಕ ಇದಕ್ಕೆ ಹೊರತಾಗಲಿಲ್ಲ. ಸಹಸ್ರಾರು ಜನ ತಮ್ಮ ಉಳಿತಾಯ, ಉದ್ಯೋಗಗಳನ್ನಷ್ಟೇ ಅಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನೂ ಕೂಡ ಈ ಪಿಡುಗಿಗೆ ಕಳೆದುಕೊಂಡರು. ಎಲ್ಲರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಹೆಣಗಾಡುತ್ತಿರುವುದನ್ನು ನೋಡುವುದೇ ಒಂದು ಕಷ್ಟಕರ ಸಂಗತಿಯಾಗಿತ್ತು. ಆದರೂ ನಮ್ಮ ಸಮಾಜ ಒಗ್ಗಟ್ಟಾಗಿ ಜನರ ಈ ಕಷ್ಟಗಳಿಗೆ ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಹಲವರು ಸಿದ್ದ ಆಹಾರವನ್ನು ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ತಲುಪಿಸುತ್ತಿದ್ದರೆ ಇನ್ನೂ ಹಲವರು ದಿನಸಿ ಸಾಮಾಗ್ರಿಗಳ ಕಿಟ್ ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ಭೇಧಭಾವವಿಲ್ಲದೆ ಪೂರೈಸಿದ ರೀತಿ ಅಭಿನಂದನೀಯ. ಸಂಚಯದ ಕೆಲ ಸದಸ್ಯರೂ ಕೂಡ ಈ ಕೆಲಸಗಳಲ್ಲಿ ಮತ್ತು ಕೋವಿಡ್ ವಾರಿಯರ್ಗಳಾಗಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆಯಲ್ಲೇ ಲಾಕ್ಡೌನ್ನ ಅರ್ಥ ಮತ್ತು ಸ್ವರೂಪ ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ನಮ್ಮ ಸಾಮಾಜಿಕ ಜವಬ್ದಾರಿಗಳನ್ನು ನಿಭಾಯಿಸುತ್ತಾ ಹಾಗೂ ಈ ಲಾಕ್ಡೌನ್ನಿಂದ ಹೊಮ್ಮಿದ ಹೊಸ ರೀತಿಯ ವರ್ಕ್ಫ್ರಂ ಹೋಮ್ ಸಂಸ್ಕøತಿಗೂ ನಾವು ಹೊಂದಿಕೊಳ್ಳತೊಡಗಿದೆವು. ನಮ್ಮ ಈ ಕಾರ್ಯಗಳ ನಡುವೆ ನಮ್ಮ ರಂಗಭೂಮಿಯ ಕೆಲಸಗಳನ್ನೂ ಕೂಡ ಹೊಸದೃಷ್ಟಿಕೋನವಾದ ಆನ್ಲೈನ್ ಮೀಡಿಯಂಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದೆವು. ಚದುರ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com