ರಂಗಪ್ರಯೋಗವಾಗಿ ಅರಳಿದ ಕಥಾಖಂಡ. ನಾಟಕ ಬೆಂಗ್ಳೂರಿನ ಪ್ರದರ್ಶನದ ಭಾಗವಾಗಿ ಜನವರಿ ೬ಕ್ಕೆ ಪ್ರಕಸಂ ತಂಡ ಆರು ಖಂಡದ ಆರು ಬರಹಗಾರರ ಸಣ್ಣಕಥೆಗಳನ್ನು ಒಂದು ನಾಟಕವನ್ನಾಗಿ ಮಾಡುವ ಸಾಹಾಸಕ್ಕೆ ಕೈ ಹಾಕಿ ಅದನ್ನು ಕಥಾಖಂಡ ಅಂತ ಆಡಿದರು. ಪೋಸ್ಟರಿನಲ್ಲಿ ನಾಟಕಕ್ಕೆ ಸಂಭಂ ದಿಸಿದ ಯಾವುದಾದರು ಸಾಂಕೇತಿಕ ಚಿತ್ರವನ್ನು ಬಳಸುವ ಬದಲು (ಹೆಚ್ಚಿನ ನಾಟಕದ ಪೋಸ್ಟರ್ಗಳು ಇದೇ ತೆರನಾದ್ದಾಗಿರುತ್ತದೆ) , ಆರು ಬರಹಗಾರರ ಚಿತ್ರಗಳನ್ನು ಹಾಕಿ ಪೋಸ್ಟರ್ ಮಾಡಿರುವುದು ಕೆಲವರಿಗೆ ವಿಭಿನ್ನ ಮತ್ತು ಇನ್ನು ಕೆಲವರಿಗೆ ಇವರಾರು ಅನ್ನುವ ತಲೆಕೆರೆತವಾಗಿ , ಹೆಚ್ಚಿನ ಸಮಜಾಯಿಷಿ ಕೇಳದೆ ಸುಮ್ಮನಾದರು. ಇಂಗ್ಲಿಷ್ ಸಾಹಿತ್ಯದ ಓದಿನವರಿಗೆ ಟಾಲಸ್ಟಾಯ್ ಮತ್ತು ಮಾರ್ಕ ಟೈನ್ರ ಮುಖ ಕೊಂಚ ಪರಿಚಿತವಾಗಿದ್ದಿರಬಹದು. ಆದರೆ ನಮಗೆ ಅಷ್ಟಾಗಿ ಕನೆಕ್ಟ್ ಆಗುತ್ತಿಲ್ಲ ಅಂತ ಮತಾಡುತ್ತಿರಬೇಕಾದರೆ , ಎಂಟನೇ ಮತ್ತು ಒಂಬತ್ತನೇ ತರಗತಿಯ ಒಂದಷ್ಟು ಮಕ್ಕಳು ‘ಏ ಚಿನುವಾ ಅಚಿಬೆ’ ಅಂತ ಉದ್ಘಾರ ತೆಗೆದರು. ಉಳಿದ ಸಾಹಿತಿಗಳನ್ನು ಗುರುತಿಸುವ ಮಕ್ಕಳ ಸಹಜ ಕುತೂಹಲವನ್ನೂ ತೋರಿಸಿದರು. ಈ ನಾಟಕದ ಉದ್ದೇಶಿತ ಪ್ರೇಕ್ಷಕರು ನಾವಲ್ಲವೇನೊ ಅನ್ನುವ ಅನುಮಾನ ಮತ್ತು ಸಮಾಧಾನದಿಂದಲೇ ಆಟ ನೋಡಿದೆವು. ತುಂಬ ಹಿಂದೆ ‘ಏವಂ ಇಂದ್ರಜೀತ್’ ಅನ್ನುವ ನಾಟಕವನ್ನು ಬಾದಲ್ ಸರ್ಕಾರ್ ಬರೆದು ಆಡಿಸಿದಾಗ ತುಂಬ ಸಂಚಲನವನ್ನು...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com