ಆತ್ಮೀಯ ಸ್ನೇಹಿತರೇ, ಕನ್ನಡ ನಾಡಿನ ಹೆಮ್ಮೆಯ ಲೇಖಕಿ ವೈದೇಹಿಯವರ ಕಾವ್ಯಮಾಲಿಕೆಯನ್ನಿಟ್ಟುಕೊಂಡು `ವ್ಯಾನಿಟಿ ಬ್ಯಾಗ್' ಅನ್ನುವ ನಾಟಕಮಾಡಲಾಗಿದ್ದು, ಈ ನಾಟಕ ಕನ್ನಡ ರಂಗಭೂಮಿಯಲ್ಲಿ ಅಪರೂಪದ ಪ್ರಯೋಗವಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯಶಸ್ವಿಯಾಗಿ ಪ್ರದರ್ಶನವಾಗಿದೆ. ಸಂಚಾರಿ ಥಿಯೇಟರ್ನವರು ಅಭಿನಯಿಸಿರುವ `ವ್ಯಾನಿಟಿ ಬ್ಯಾಗ್' ನಾಟಕಕ್ಕೆ ರಂಗಕರ್ಮಿ ಮಂಗಳಾ.ಎನ್ ಅವರ ದಕ್ಷ ನಿರ್ದೇಶನವಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿರುವ `ವ್ಯಾನಿಟಿ ಬ್ಯಾಗ್' ಈಗ ಬೆಂಗಳೂರಿನರಂಗಪ್ರಿಯರಿಗಾಗಿ ಹನುಮಂತರಂಗದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನವನ್ನು `ಸರ್ವಸ್ವ'ತಂಡವು ಹಮ್ಮಿಕೊಂಡಿದೆ. `ಸರ್ವಸ್ವ' ಸಂಸ್ಥೆಯ ಉದ್ಘಾಟನೆ ಈ ನಾಟಕ ಪ್ರದರ್ಶನದ ಜೊತೆಗೆ `ಸರ್ವಸ್ವ' ಅನ್ನುವ ರಂಗತಂಡದ ಸಂಸ್ಥೆಯು ಕೂಡ ಉದ್ಘಾಟನೆಯಾಗಲಿದೆ. ರಂಗಭೂಮಿ,ನೃತ್ಯ, ಸಂಗೀತ, ಸಿನಿಮಾ ಇನ್ನು ಹಲವು ಕಲಾ ಮಾಧ್ಯಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ, ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುವ, ಆ ಮೂಲಕ ಸಾಂಸ್ಕೃತಿಕ ಜಗತ್ತಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು, ನಾಟಕಗಳನ್ನು ಮಾಡುವ ಅಪೂರ್ವಯೋಜನೆಗಳೊಂದಿಗೆ `ಸರ್ವಸ್ವ' ತಂಡವು ಪ್ರಾರಂಭವಾಗುತ್ತಿದೆ. ಈಗಾಗಲೇ ರಂಗಭೂಮಿ, ನೃತ್ಯ ಇನ್ನು ಹಲವು ಮನರಂಜನಾಮಾಧ್ಯಮಗಳಲ್ಲಿ ಕೆಲಸ ಮಾಡಿ, ಆ ನೆಲದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡಿ, ಅನುಭವ ಪಡೆದ ಸಮಾನ ಮನಸ್...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com