ಮತ್ತೆ ‘ಪೂರ್ವರಂಗ’ ಆರಂಭ..!
ಬೇರೆ ಬೇರೆ ಹಂತಗಳಲ್ಲಿ ಅಭಿನಯ ಕಾರ್ಯಾಗಾರ!
ಜುಲೈ 5 ರಿಂದ 19ನೇ ತಾರೀಖಿನವರಿಗೆ
ಸಂಜೆ 6.30 ರಿಂದ 8.30 ರವರೆಗೆ
ಸ್ಥಳ : ‘ಸಂಚಾರಿ ಥಿಯೇಟರ್ ಅಂಗಳ’
‘ಕೆ. ಹೆಚ್.ಕಲಾಸೌಧ’ದ ಕೆಳಗೆ
(ಹನುಮಂತನಗರ)
ನೊಂದಾಯಿಸಲು ಸಂಪರ್ಕಿಸಿ:
88843 45569
sancharitheatremail@gmail.com
ರಂಗಾಭಿನಯವೆನ್ನುವುದು ಒಂದು ಗಂಭೀರವಾದ ಸಂವಹನೆಯ ಮಾಧ್ಯಮ. ಕಲಾವಿದನೊಬ್ಬ ರಂಗದ ಮೇಲೆ ತನ್ನ ದೇಹ, ಧ್ವನಿ, ಮನಸ್ಸು, ಬುದ್ಧಿಗಳನ್ನು ಬಳಸಿಕೊಂಡು ಸಂವಹನೆಯನ್ನು ನಡೆಸಬೇಕಾಗುತ್ತದೆ. ಇಲ್ಲಿ ಧ್ವನಿ, ದೇಹ ಮನಸು, ಬುದ್ಧಿ-ಭಾವಗಳನ್ನು ನಿಯಮಿತವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸಬೇಕಾಗುತ್ತದೆ. ಜೊತೆಜೊತೆಯಲ್ಲೇ ಅದು ಪ್ರೇಕ್ಷಕರನ್ನೂ ತಲುಪಬೇಕು. ಈ ಕಾರ್ಯ ಮೇಲ್ನೋಟಕ್ಕೆ ತೀರ ಸುಲಭ ಎಂದೆನಿಸಿದರೂ ನಂತರದಲ್ಲಿ ಸಂಕೀರ್ಣವಾಗುತ್ತ ಸಾಗುತ್ತದೆ. ಇದಕ್ಕೆಂದೆ ಬೇರೆ ಬೇರೆ ವಿಧಾನಗಳು, ಸಿದ್ಧಾಂತಗಳು, ಶೈಲಿಗಳು ಹುಟ್ಟಿಕೊಂಡಿವೆ. ಕಾಲಕಾಲಕ್ಕೆ ಅದು ಬದಲಾಗುತ್ತಲೂ ಸಾಗಿದೆ. ಹೀಗೆ ಭಿನ್ನ ಅಭಿನಯ ದಾರಿ, ಶೈಲಿ, ಸಿದ್ಧಾಂತಗಳಿಗೆ ತಮ್ಮನ್ನು ತೆರೆದುಕೊಳ್ಳಲು ಅಭ್ಯಾಸ ಮಾಡಲು ತರಬೇತಿಯು ಮುಖ್ಯ ಪಾತ್ರ ವಹಿಸುತ್ತದೆ. ರೂಡಿಗತವಾದ ದೈಹಿಕ ಚಲನೆಗಳು, ನಿಲುವು, ಭಂಗಿ, ಧ್ವನಿ-ಭಾಷೆಯ ವ್ಯಾಯಾಮಗಳು, ಉಚ್ಚಾರಗಳು ವಾಚಿಕ ಮಾದರಿಗಳ ಜೊತೆಜೊತೆಯಲ್ಲೇ ಅದನ್ನು ಮೀರಿ ನಿಲ್ಲುವ ಅಮೂರ್ತವಾದ, ಶೈಲೀಕೃತವಾದ ವಿಧಾನಗಳನ್ನು ದೇಹ, ಧ್ವನಿ, ಮನಸು, ಬುದ್ಧಿ-ಭಾವಗಳು ಅರಗಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ರಂಗತರಬೇತಿಯ ಅವಶ್ಯಕತೆ ಇರುತ್ತದೆ.
ರಂಗತರಬೇತಿಯಲ್ಲಿ ಏಕಕಾಲಕ್ಕೆ ದೇಹ, ಮನಸು, ಮಾತು, ಚಿಂತನೆ, ಭಾವನೆ, ಎಲ್ಲವನ್ನೂ ಹಿಡಿತದಲ್ಲಿಟ್ಟು ಕೊಳ್ಳುವ ಕಸರತ್ತು ಮಾಡಬೇಕಾಗುತ್ತದೆ. ಸಾಹಿತ್ಯವನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಾ, ಅರಗಿಸಿಕೊಳ್ಳುತ್ತಾ ಪ್ರದರ್ಶನಕ್ಕೆ ಸಜ್ಜುಗೊಲಿಸಬೇಕಗುತ್ತದೆ. ಹಾಗಾಗಿ ರಂಗಭೂಮಿ ಭುದ್ಧಿಕವೂ, ಇಂದ್ರಿಯವೂ, ಆಂಗಿಕವೂ ಆಗಿರುತ್ತದೆ.
ನಟನಾಗಬಯಸುವವನು ಮೊದಲಿಗೆ ತನ್ನನ್ನು ತಾನು ಅರಿತು ಕೊಳ್ಳಬೇಕಾಗುತ್ತದೆ. ಮತ್ತು ಆ ಅರಿವನ್ನು ವಿಸ್ತರಿಸಿ ಕೊಳ್ಳಬೇಕಾಗುತ್ತದೆ. ಅಂದರೆ ನಟ ತನ್ನನ್ನು ಒರೆಗೆ ಹಚ್ಚಿಕೊಳ್ಳಬೇಕು. ಅದಕ್ಕೆ ತರಬೇತಿಯ ಅವಶ್ಯಕತೆ ಇರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ.
ಸಂಚಾರಿ ಥಿಯೇಟರ್ ಈ ನಿಟ್ಟಿನಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಯೋಜನೆ ಒಂದನ್ನು ಹಾಕಿಕೊಂಡಿದೆ. ರಂಗದ ಮೇಲೆ ಹೋಗುವ ಮೊದಲು ನಡೆಸುವ ಈ ಸಿದ್ಧತೆಯನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ. ಕೆಲವು ಬಾರಿ ರಂಗಪ್ರವೇಶ ಮಾಡುತ್ತಲೂ, ರಂಗದ ಮೇಲೂ, ಕಲಿಯಬೇಕಾಗುತ್ತದೆ. ಈ ಪ್ರಕ್ರಿಯೆಯ ಮೊದಲ ಹಂತವೇ ಪೂರ್ವರಂಗ-1
ಬೇರೆ ಬೇರೆ ಹಂತಗಳಲ್ಲಿ ಅಭಿನಯ ಕಾರ್ಯಾಗಾರ!
ಜುಲೈ 5 ರಿಂದ 19ನೇ ತಾರೀಖಿನವರಿಗೆ
ಸಂಜೆ 6.30 ರಿಂದ 8.30 ರವರೆಗೆ
ಸ್ಥಳ : ‘ಸಂಚಾರಿ ಥಿಯೇಟರ್ ಅಂಗಳ’
‘ಕೆ. ಹೆಚ್.ಕಲಾಸೌಧ’ದ ಕೆಳಗೆ
(ಹನುಮಂತನಗರ)
ನೊಂದಾಯಿಸಲು ಸಂಪರ್ಕಿಸಿ:
88843 45569
sancharitheatremail@gmail.com
ರಂಗಾಭಿನಯವೆನ್ನುವುದು ಒಂದು ಗಂಭೀರವಾದ ಸಂವಹನೆಯ ಮಾಧ್ಯಮ. ಕಲಾವಿದನೊಬ್ಬ ರಂಗದ ಮೇಲೆ ತನ್ನ ದೇಹ, ಧ್ವನಿ, ಮನಸ್ಸು, ಬುದ್ಧಿಗಳನ್ನು ಬಳಸಿಕೊಂಡು ಸಂವಹನೆಯನ್ನು ನಡೆಸಬೇಕಾಗುತ್ತದೆ. ಇಲ್ಲಿ ಧ್ವನಿ, ದೇಹ ಮನಸು, ಬುದ್ಧಿ-ಭಾವಗಳನ್ನು ನಿಯಮಿತವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸಬೇಕಾಗುತ್ತದೆ. ಜೊತೆಜೊತೆಯಲ್ಲೇ ಅದು ಪ್ರೇಕ್ಷಕರನ್ನೂ ತಲುಪಬೇಕು. ಈ ಕಾರ್ಯ ಮೇಲ್ನೋಟಕ್ಕೆ ತೀರ ಸುಲಭ ಎಂದೆನಿಸಿದರೂ ನಂತರದಲ್ಲಿ ಸಂಕೀರ್ಣವಾಗುತ್ತ ಸಾಗುತ್ತದೆ. ಇದಕ್ಕೆಂದೆ ಬೇರೆ ಬೇರೆ ವಿಧಾನಗಳು, ಸಿದ್ಧಾಂತಗಳು, ಶೈಲಿಗಳು ಹುಟ್ಟಿಕೊಂಡಿವೆ. ಕಾಲಕಾಲಕ್ಕೆ ಅದು ಬದಲಾಗುತ್ತಲೂ ಸಾಗಿದೆ. ಹೀಗೆ ಭಿನ್ನ ಅಭಿನಯ ದಾರಿ, ಶೈಲಿ, ಸಿದ್ಧಾಂತಗಳಿಗೆ ತಮ್ಮನ್ನು ತೆರೆದುಕೊಳ್ಳಲು ಅಭ್ಯಾಸ ಮಾಡಲು ತರಬೇತಿಯು ಮುಖ್ಯ ಪಾತ್ರ ವಹಿಸುತ್ತದೆ. ರೂಡಿಗತವಾದ ದೈಹಿಕ ಚಲನೆಗಳು, ನಿಲುವು, ಭಂಗಿ, ಧ್ವನಿ-ಭಾಷೆಯ ವ್ಯಾಯಾಮಗಳು, ಉಚ್ಚಾರಗಳು ವಾಚಿಕ ಮಾದರಿಗಳ ಜೊತೆಜೊತೆಯಲ್ಲೇ ಅದನ್ನು ಮೀರಿ ನಿಲ್ಲುವ ಅಮೂರ್ತವಾದ, ಶೈಲೀಕೃತವಾದ ವಿಧಾನಗಳನ್ನು ದೇಹ, ಧ್ವನಿ, ಮನಸು, ಬುದ್ಧಿ-ಭಾವಗಳು ಅರಗಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ರಂಗತರಬೇತಿಯ ಅವಶ್ಯಕತೆ ಇರುತ್ತದೆ.
ರಂಗತರಬೇತಿಯಲ್ಲಿ ಏಕಕಾಲಕ್ಕೆ ದೇಹ, ಮನಸು, ಮಾತು, ಚಿಂತನೆ, ಭಾವನೆ, ಎಲ್ಲವನ್ನೂ ಹಿಡಿತದಲ್ಲಿಟ್ಟು ಕೊಳ್ಳುವ ಕಸರತ್ತು ಮಾಡಬೇಕಾಗುತ್ತದೆ. ಸಾಹಿತ್ಯವನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಾ, ಅರಗಿಸಿಕೊಳ್ಳುತ್ತಾ ಪ್ರದರ್ಶನಕ್ಕೆ ಸಜ್ಜುಗೊಲಿಸಬೇಕಗುತ್ತದೆ. ಹಾಗಾಗಿ ರಂಗಭೂಮಿ ಭುದ್ಧಿಕವೂ, ಇಂದ್ರಿಯವೂ, ಆಂಗಿಕವೂ ಆಗಿರುತ್ತದೆ.
ನಟನಾಗಬಯಸುವವನು ಮೊದಲಿಗೆ ತನ್ನನ್ನು ತಾನು ಅರಿತು ಕೊಳ್ಳಬೇಕಾಗುತ್ತದೆ. ಮತ್ತು ಆ ಅರಿವನ್ನು ವಿಸ್ತರಿಸಿ ಕೊಳ್ಳಬೇಕಾಗುತ್ತದೆ. ಅಂದರೆ ನಟ ತನ್ನನ್ನು ಒರೆಗೆ ಹಚ್ಚಿಕೊಳ್ಳಬೇಕು. ಅದಕ್ಕೆ ತರಬೇತಿಯ ಅವಶ್ಯಕತೆ ಇರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ.
ಸಂಚಾರಿ ಥಿಯೇಟರ್ ಈ ನಿಟ್ಟಿನಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಯೋಜನೆ ಒಂದನ್ನು ಹಾಕಿಕೊಂಡಿದೆ. ರಂಗದ ಮೇಲೆ ಹೋಗುವ ಮೊದಲು ನಡೆಸುವ ಈ ಸಿದ್ಧತೆಯನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ. ಕೆಲವು ಬಾರಿ ರಂಗಪ್ರವೇಶ ಮಾಡುತ್ತಲೂ, ರಂಗದ ಮೇಲೂ, ಕಲಿಯಬೇಕಾಗುತ್ತದೆ. ಈ ಪ್ರಕ್ರಿಯೆಯ ಮೊದಲ ಹಂತವೇ ಪೂರ್ವರಂಗ-1
Comments
Post a Comment