ಕರೋನಮ್ಮನ ಕೃಪೆ - ಪ್ರಕಸಂನ ಪ್ರಸ್ತುತಿ. PHOTOS - SHOW 1 | SHOW 2 | SHOW 3 | SHOW 4 ಕರೋನಾದ ಕರಾಳತೆಯಲ್ಲಿ ಮುಳಿಗಿ ಅಳಿದು ಉಳಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಡುವ ಮಟ್ಟಕ್ಕೆ ತಲುಪಿರುವ ನಾವು ಈಗ ಕರೋನಾದ ಬಗ್ಗೆ ಚರ್ಚಿಸುವ, ವಿಮರ್ಶಿಸುವ ಸಾಹಸ ಮಾಡಿದ್ದೇವೆ. ನಾವು ಕಂಡು ಕೇಳಿ ಅನುಭವಿಸಿರುವ ಸಮದರ್ಭಗಳನ್ನು ಅಳವಡಿಸಿ ಕರೋನ ಹಾಕಿಸಿದ ಕಣ್ಣೀರು, ತಂದಿಟ್ಟ ಆತಂಕ ಹಾಗು ಕಲಿಸಿದ ಪಾಠಗಳ ಅನಾವರಣವೇ ಕರೋನಮ್ಮನ ಕೃಪೆ . ಈ 35 ನಿಮಿಷದ ನಾಟಕದಲ್ಲಿ, ಸಿಸ್ಟಮ್ನ ಒಳಗೆ ಸಿಲುಕಿ ಬೇಡವಾದರು ನೋವುಂಡವರ, ಕರೋನ ತೆರೆದಿಟ್ಟ ಅವಕಾಶಗಳಿಂದ ಅಭಿವೃದ್ದಿ ಹೊಂದಿದವರ ಕಥನ ಈ ನಾಟಕ. ಪಿ.ಡಿ. ಸತೀಶ್ ಚಂದ್ರ ನಿರ್ದೇಶನದ ಹಾಗು ಚಂದನ್ ಶಂಕರ್ ರಚನೆಯ ಅನೇಕ ನಾಟಕಗಳಲ್ಲಿ ಇದು ಹೊಚ್ಚ ಹೊಸದು. ಈ ಮುಂಚೆ ಹೊಸಬೆಳಕು , ಮಾರ್ಗೋಸಾ ಮಹಲ್ , ಬೋಗಿ , ಸೈರಂಧ್ರೀ , ಕಥಾ ಸಂಗಮ ಅನ್ನೋ ಹೆಸರುವಾಸಿ ನಾಟಕಗಳನ್ನು ವೇದಿಕೆಗೆ ತಂದಿದ್ದಾರೆ. ಮೊದಲ ಪ್ರದರ್ಶನ, ವ್ಯೋಮಾ ನಾಟಕೋತ್ಸವಕ್ಕಾಗಿ, ಭಾನುವಾರ ಮಾರ್ಚಿ 6, 2022 ತಂಡದ ಪರಿಚಯ Anchor ಆಗಿ ಪಲ್ಲವಿ/ಪೂಜಾ ಕಶ್ಯಪ್ ಅಭಿಜಿತ್ ಆಗಿ ಶ್ರೀಹರಿ ಕಶ್ಯಪ್ ರಾಗಿಣಿ ಆಗಿ ಮೇಘನ/ಪೂಜಾ ರಾವ್ ಯೋಗಾನಂದ್ ಆಗಿ ನಿಖಿಲ್ ಪಾರ್ಥಸಾರಥಿ ವಿನುತ ಆಗಿ ರೂಪ ಕೋಮರ್ಲ ಸಂಗೀತ ಮತ್ತು ಹಾಡು: ನಿಖಿಲ್ ಪಾರ್ಥಸಾರಥಿ ವಿನ್ಯಾಸ ಮತ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com