![]() |
Flex Design for the Play |
ದಿನಾಂಕ ಮತ್ತು ಸಮಯ - ಆಗಸ್ಟ್ ೨೫ ಸಂಜೆ ೭:೩೦ಕ್ಕೆ
ಸ್ಥಳ: ಕೆಂಗಲ್ ಹನುಮಂತಯ್ಯ ಕಲಾ ಸೋಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ, ಬಸವನಗುಡಿ ಬೆಂಗಳೂರು-560019
ವಿವರಗಳಿಗೆ prakasamtrust.org/hb ಗೆ ಲಾಗಾನ್ ಮಾಡಿ ಅಥವಾ 7259998222/333 ಗೆ ಕರೆ ಮಾಡಿ.
ಹೊಸಬೆಳಕು ರಂಗರೂಪ - ಕಾದಂಬರಿ ಹಾಗೂ ಚಲನಚಿತ್ರದಲ್ಲಿ ಅಳವಡಿಸಿರುವ ಎರಡು ಕಥೆಗಳ ಹದವಾದ ಮಿಶ್ರಣ ಹೊಂದಿದೆ. ಈ ನಾಟಕದಲ್ಲಿ ಒಂಬತ್ತು ಪಾತ್ರಗಳಿದ್ದು ಎಲ್ಲಾ ಪಾತ್ರಗಳು ಸಾಕಾರಗೊಳಿಸುವಲ್ಲಿ ಸಹಕಾರಿಯಾಗಲಿವೆ. ಹೇಗೆ ಒಬ್ಬ ಪ್ರಭುದ್ದ ಹೆಣ್ಣು ತನ್ನ ಜಾಣ್ಮೆಯಿಂದ ಸುತ್ತಮುತ್ತಲಿನ ಪರಿಸ್ಥಿತಿಗಳು ಮತ್ತು ಸಂಭಂದಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ತಿದ್ದಿ ತನ್ನ ಹಾಗು ತನ್ನ ಪ್ರೀತಿಪಾತ್ರಾರ ಬದುಕನ್ನು ಸಾಕಾರಗೊಳಿಸುತ್ತಾಳೆ ಎಂಬುವುದೇ ಈ ನಾಟಕದ ಕಥಾ ಹಂದರ.
ಕಾದಂಬರಿ ಹಾಗೂ ಬೆಳ್ಳೆ ತೆರೆಯಲ್ಲಿ ಯಶಸ್ಸು ಕಂಡಿರುವ ಈ ಕಥೆ ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯ ಜನರ ನಿರೀಕ್ಷೆಯನ್ನು ಮುಟ್ಟುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಎಲ್ಲ ಪ್ರಯತ್ನದ ನಂತರವು ರಂಗದ ಮೇಲೆ ಬರುವವರು ಡಾ. ರಾಜ್ ಮತ್ತು ಸರಿತಾ ಅಲ್ಲಾ ಎಂದು ಪ್ರೆಕ್ಷಕರನ್ನು ನಂಬಿಸುವ ಸವಾಲು ನಮ್ಮ ಮುಂದಿದೆ. ಕಳೆದ ಎಂಟು ವರ್ಷಗಳಲ್ಲಿ ನಿರ್ದೇಶಿಸಿರುವ ನಾಟಕಗಳಲ್ಲಿ ಇದು ಅತಿ ಕ್ಲಿಷ್ಟಕರವಾದ ನಾಟಕ ಇದಾಗಿದ್ದು ನಡೆದಿರುವ ಎಲ್ಲಾ ಪ್ರದರ್ಶನಗಳಲ್ಲೂ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಿ. ಡಿ. ಸತೀಶ್ ಚಂದ್ರ ಹಾಗು ಚಂದನ್ ಶಂಕರ್ ಜೋಡಿ, ಬದಲಾಗಿರುವ ಸಾಮಾಜಿಕ ಪರಿಸ್ಥಿತಿಗಳನ್ನ ಅಳವಡಿಸಿ ಈ ಕಥೆಯನ್ನು ಆಧುನಿಕ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ವಿಷೇಶತೆಗಳು
~ ಮೊಟ್ಟ ಮೊದಲ ಬಾರಿಗೆ ಕಾದಂಬರಿ ಹಾಗೂ ಚಲನಚಿತ್ರದಲ್ಲಿ ಅಳವಡಿಸಿರುವ ಕಥೆಗಳನ್ನು ಬಳಸಿ ನೂತನವಾದ ರಂಗರೂಪವನ್ನು ಸಿದ್ಧಪಡಿಸಲಾಗಿದೆ
~ ಆಧುನಿಕತೆ ಹಾಗು ನವೀನತೆಯನ್ನು ಪ್ರತಿಯೊಂದು ದೃಶ್ಯದಲ್ಲೂ ಅಳವಡಿಸಲಾಗಿದ್ದು ಈ ಕಥೆ ಎಂದೆಂದಿಗೂ ಪ್ರಸ್ತುತ
~ ಎಂ. ರಂಗರಾವ್ ಅವರ ಸುಮಧುರ ಸಂಗೀತವನ್ನು ನಾಟಕದಲ್ಲೂ ಬಳಸಲಾಗಿದೆ
ನಿರ್ದೇಶಕರು ಪಿ. ಡಿ. ಸತೀಶ್ ಚಂದ್ರ
ಸತೀಶ್ರವರು ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ದೊರಕಿಸಬೇಕೆಂಬ ಬಯಕೆಯಿಂದ ಪ್ರಕಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ. ಕೆಂಗಲ್ ಹನುಮಂತಯ್ಯ ಕಲಾ ಸೋಧದ ನಿರ್ದೇಶಕರಾಗಿ ಯುವ ಹಾಗು ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನ ರೂಪಿಸಿದ್ದಾರೆ. ಇವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾಂಡುರಂಗ ವಿಠಲ ಮತ್ತು ಭಲೇ ಬಸವ ಧಾರವಾಹಿಗಳಲ್ಲಿ ನಟಿಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿರ್ದೇಶಕರ ನುಡಿ
ಪ್ರಕಸಂ ಕಲಾ ಸೋಧದವನ್ನು ಕೈಗೆತ್ತಿಕೊಂಡಾಗ, ಈ ಸ್ಥಳದ ಅರಿವು ಹಾಗು ನಡೆವ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರನ್ನು ಕರೆತರುವುದಾಗಿತ್ತು. ರಂಗಭೂಮಿಗೆ ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕುವುದು ಪ್ರಕಸಂನ ಆದ್ಯ ಕರ್ತವ್ಯಕೂಡ. ಮನೋರಂಜನೆಯೇ ಪ್ರಧಾನವಾದ ಹೊಸಾ ಪ್ರಯೋಗದ ಆಗತ್ಯ ಆಗ ನಮಗೆ ಕಂಡಿತು. ಥಟ್ಟನೆ ಹೊಳೆದ ಉಪಾಯವೇ ಹೊಸಬೆಳಕು. ಚಲನಚಿತ್ರವನ್ನು ನೇರವಾಗಿ ರಂಗದಮೇಲೆ ರೀಮೇಕ್ ಮಾಡಲು ನಮ್ಮ ಮನಸ್ಸು ಒಪ್ಪಲಿಲ್ಲ. ಹಾಗಾಗಿ ಕಾದಂಬರಿಯನ್ನು ಓದಿದ ನಂತರ ನಮಗೆ ಯಾಕೆ "ಸ್ತ್ರೀ ಸಬಲೀಕರಣ"ದ ಸಂದೇಶವನ್ನು ಈ ನಾಟಕ ವೇದಿಕೆ ಕಂಡಿತು. ಬಂದು ನೋಡಿದ ಪ್ರತಿಯೊಬ್ಬರ ಮನಗೆದ್ದ ಹೊಸಬೆಳಕು ನನ್ನ ಹಾಗು ನನ್ನ ತಂಡದ ಅಪ್ರತಿಮ ಕೃತಿ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇದಕ್ಕೆ ಸಮ್ಮತಿ ತೋರಿದ ಶ್ರೀ ರಾಘವೇಂದ್ರ ರಾಜ್ ಕುಮಾರ್, ಶ್ರೀ ಭಗವಾನ್ ಮತ್ತು ಬಂದು ಹರಿಸಿದ ಪ್ರೇಕ್ಷಕರಿಗೆ ನನ್ನ ನಮನಗಳು.
ಪ್ರದರ್ಶನ ಕಲಾ ಸಂಸ್ಥೆ (ಪ್ರಕಸಂ):
ಪ್ರದರ್ಶನ ಕಲಾ ಸಂಸ್ಥೆಯು ಪ್ರದರ್ಶನ ಕಲೆಗಳನ್ನು ನಿರ್ಮಿಸಿ, ನಿರೂಪಿಸಿ, ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಫೊರ್ಥ್ ಕಾರ್ನರ್ ಸಂಸ್ಥೆಯ ಸ್ವಯಂ ಸೇವಾ ಅಂಗವಾದ ಪ್ರ.ಕ.ಸಂ ಕೆಂಗಲ್ ಹನುಮಂತಯ್ಯ ಕಲಾ ಸೋಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಹನುಮಂತನಗರ ಹಾಗು ಬಸವನಗುಡಿಯ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.
ವಿವರಗಳಿಗಾಗಿ ಸಂಪರ್ಕಿಸಿ ಶ್ರೀ ಚಂದ್ರು -7259998222/333, ಈ-ವಿಳಾಸ: prakasamtrust@gmail.com
Comments
Post a Comment