ಭಾವಾಂತರಂಗ ಅರ್ಪಿಸುವ "ಪ್ರೀಣಿತ"
Summary: ಪ್ರೀತಿಯೆಂದರೆ ಪ್ರಕೃತಿ, ಪ್ರಕೃತಿಯೆಂದರೆ ಪ್ರೀತಿ, ಈ ಪ್ರೀತಿಯಲ್ಲಿ ಲಿಂಗ, ಜಾತಿ, ಧರ್ಮ, ಅಂತರ ಎಂಬ ಹಲವಾರು ಕಟ್ಟು ಪಾಡುಗಳನ್ನು ನಾವು ಹಾಕಿ ಕೊಂಡು ಅದನ್ನು ಪ್ರಕೃತಿ ಸಹಜವೆಂಬ ಭ್ರಮೆಯಲ್ಲಿ ಜೀವಿಸುತ್ತಾ ಎಷ್ಟೋ ಭಾವನೆಗಳನ್ನು ಮುಚ್ಚಿಟ್ಟು ಬದುಕುವ ಜೀವನದಲ್ಲಿ ಸತ್ತಿದ್ದೇವೆ ಎನ್ನುವುದನ್ನು ಮರೆಯುತ್ತೇವೆ. ಇದನ್ನು ವಿರೋದಿಸಿ ನೈಜವಾಗಿ ಜೀವಿಸುವ ಜೀವಿಗಳ ನಡುವೆ ಅಕ್ರಮ - ಸಕ್ರಮಗಳ ಬದ್ಧತೆಯ ಕುಣಿಕೆಯಲ್ಲಿ ಒದ್ದಾಡುವ ಸುಂದರ ನಗ್ನ ಪ್ರೀತಿ.
Director: ನಿರ್ದೇಶಕ - ಶೃಂಗಾರ ಸಿ ಎಂ
ಅಭಿನಯ ತರಂಗ ಸಂಸ್ಥೆಯ ಮೂಲಕ ಡಿಪ್ಲೊಮಾ ಇನ್ ಥಿಯೇಟರ್ ಪದವಿಯನ್ನು ಪಡೆದಿದ್ದಾರೆ. ಅಭಿನಯದ ಜೊತೆಗೆ ನಿರ್ದೇಶನದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದು, ನೈಜತೆಯನ್ನು ರಂಗದ ಮೇಲೆ ಯಾತಾವತ್ತು ತರುವಲ್ಲಿ ಕ್ರಿಯಾಶೀಲರಾಗಿ ಗಮನಾರ್ಹ ಕೆಲಸ ಮಾಡುವಲ್ಲಿ ಬಹಳ ಉತ್ಸುಕರಾಗಿದ್ದಾರೆ.
Writer: ರಚನೆಕಾರರು- ವಿಜಯಲಕ್ಷ್ಮಿ ಮಂಡ್ಯ
ಕಳೆದ 14 ವರ್ಷದಿಂದ ರಂಗಭೂಮಿಯಲ್ಲಿ ಕಲಾವಿದೆಯಾಗಿ, ನಿರ್ದೇಶಕರಾಗಿ ಹಾಗೂ ನೇಪಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾವಾಂತರಂಗ ತಂಡದ ಮೂಲಕ ಸಕ್ರಿಯವಾಗಿ ಸಾಗುತ್ತಿದ್ದಾರೆ. 2011ರಲ್ಲಿ "ಭಾವನಾಂತರಾಳ" ಕವನ ಸಂಕಲನ ಪ್ರಕಟಿಸಿದ್ದಾರೆ. ಗೂಡು, ವೃಕ್ಷಾಂತರಂಗ, ಕಾನ್ಕರ್ ಹೀಗೆ ಇನ್ನೂ ಕೆಲವು ನಾಟಕಗಳನ್ನು ರಚಿಸಿದ್ದಾರೆ. ನಾಟಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2019ರಲ್ಲಿ "ನನ್ನೊಳಗಿನ ನಾನು" ಎಂಬ ಏಕ ವ್ಯಕ್ತಿ ನಾಟಕದಲ್ಲಿ ಅಭಿನಯಿಸಿ ಏಷ್ಯಾ ಬುಕ್ ದಾಖಲೆಯನ್ನು ಮಾಡಿದ್ದಾರೆ. ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸುತ್ತಾ, ಶ್ರೀ ಸಾಮಾನ್ಯ ಮತ್ತು ಪುಣ್ಯವತಿ ಎಂಬ ಕಲಾತ್ಮಕ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
Cast: To be provided
Crew: To be provided
Team Contact: ಶೃಂಗಾರ ಸಿ ಎಂ - 9164325045 / 9606902775
FACEBOOK : Facebook.com/ಭಾವಾಂತರಂಗ
Facebook Event: https://fb.me/e/1o1KFhQN5
Comments
Post a Comment