ಭಾವರಂಗ ಅರ್ಪಿಸುವ "ವೃದ್ದಾಶ್ರಯ"
Summary: "ವೃದ್ದಾಶ್ರಯ"
60ರ ಆಸುಪಾಸಿನ ವೃದ್ಧನಿದ್ದಾನೆ, ಆತನ ಪತ್ನಿ ತೀರಿಹೋಗಿದ್ದಾಳೆ. ಇರುವ ಮಕ್ಕಳೆಲ್ಲ ದೂರದ ದೇಶಗಳಲ್ಲಿ ನೆಲೆಸಿದ್ದಾರೆ. ಈತ ಒಂಟಿತನದ ಕಾರಣಕ್ಕೆ ವೃದ್ಧಾಶ್ರಮವನ್ನ ಆಶ್ರಯಿಸುತ್ತಾನೆ. ದಿನ ಕಳೆಯುತ್ತಿದ್ದಾನೆ . ಅಲ್ಲಿ ಆತನಿಗೆ 50ರ ಆಸುಪಾಸಿನ ಮಹಿಳೆಯೋರ್ವರು ಪರಿಚಯವಾಗುತ್ತಾರೆ. ಪರಿಚಯ, ಗೆಳೆತನಕ್ಕೆ, ಗೆಳೆತನ ಸಾಂಗತ್ಯಕ್ಕೆ ತಿರುಗುತ್ತದೆ . ಆಕೆಯ ಪರಿಸ್ಥಿತಿಯೂ ಹೆಚ್ಚುಕಡಿಮೆ ವೃದ್ಧನಂತೆಯೇ. ಮೊದಲು ಅಳುಕಿದರೂ, ತಮ್ಮಾಸೆಯಂತೆ ಮದುವೆಯನ್ನೂ ಆಗುತ್ತಾರೆ. ಹಿತವಾದ ದಾಂಪತ್ಯ, ಆಸರೆಯನ್ನು ಪರಸ್ಪರ ಪಡೆದು ಸಂತೋಷದಿಂದ ಇರುತ್ತಾರೆ.....
ಇಳಿವಯಸ್ಸಿನಲ್ಲೂ ಮನುಷ್ಯ ಪ್ರೇಮಕ್ಕಾಗಿ, ಯಾರದೋ ಜೊತೆಗಾಗಿ ಹಂಬಲಿಸುತ್ತಾನೆ . ಹಂಬಲಿಸಿದ್ದು ಸಿಕ್ಕಮೇಲೆ ಬದುಕು ಹಸನಾಗಿ ಹೊಸತಾಗಿ ಸಾಗುತ್ತದೆ.
Writer and Director: ವೈಷ್ಣವಿ ವಿ ಅಣ್ಣಿಗೇರಿ
ಅಭಿನಯ ತರಂಗ ರಂಗ ಶಾಲೆಯಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ನ ನಂತರ .....
" ಶ್ರೀ ರುಚಿ ಕಥೆ " ಎಂಬ ಕಿರು ನಾಟಕದ ನಿರ್ದೇಶನ
" ಅಡುಗೆ ಮನೆಯಲ್ಲೊಂದು ಹುಲಿ " ನಾಟಕದಲ್ಲಿ ನಟನೆ
"ಕೋರ್ಟ್ ಮಾರ್ಷಲ್ " ನಾಟಕದಲ್ಲಿ ನಟನೆ
" ಪರಿಹಾರ " ನಾಟಕದಲ್ಲಿ ನಟನೆ
" ಗಾಡೋ " ನಾಟಕದಲ್ಲಿ ನಟನೆ
"ಹಯವದನ " ನಾಟಕದಲ್ಲಿ ರಂಗದ ಹಿಂದೆ
" ಶಿಶಿರ ವಸಂತ " ನಾಟಕದಲ್ಲಿ ನಟನೆಯನ್ನು ಸೇರಿ
ರಂಗಭೂಮಿಯಲ್ಲಿ 4 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
Cast: To be provided
Crew: To be provided
Team Contact: Vaishnavi - 9611810421
INSTAGRAM : @thespian_papilionem
Facebook Event: https://fb.me/e/1dIAWO6M4
Comments
Post a Comment